sreedhar ವೇದ ಧರ್ಮವು ಪರಮ ಅಹಿಂಸಾಧರ್ಮ
ಈ ಮೇಲಿನ ಅಶ್ವಮೇಧ ಯಾಗದ ಅಹಿಂಸೆಯ ಬಗೆಗಿನ ಲೇಖನವನ್ನು ಬರೆದಿರುವ ಶ್ರೀಧರ್ ರವರೆ...
ನೀವು ಕೆಲವು ವಿಷಯಗಳನ್ನು ಗಮನಿಸಬೇಕು.
ನೀವು ಭೇಟಿಯಾದ ಅಶ್ವಮೇಧ ಯಾಗದಲ್ಲಿ ಪಾಲ್ಗೊಂಡ ವೇದ ವಿದ್ವಾಂಸರು ಅವಿವೇಕಿ ಚಿಂತಗೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದ್ದೀರಿ.( ಏಕೆಂದರೆ ಅವರು ನಿಮ್ಮ ಚಿಂತನೆಯನ್ನು ಸರಿ ಎಂದು ಒಪ್ಪಿಕೊಂಡಿಲ್ಲ.)
ನಿಮ್ಮ ಮನಸಿನಲ್ಲಿರುವ ಅಭಿಪ್ರಾಯ ಪರಮ ಸತ್ಯ ಎಂದು ನೀವು ಭಾವಿಸಿರುವ ಹಾಗಿದೆ. ನಿಮ್ಮ ಮಾತುಗಳನ್ನು ಒಪ್ಪದವರೆಲ್ಲ ನಿಮಗೆ ಅವಿವೆಕಿಗಳಾಗಿ ಕಾಣ ಬಹುದು.. ನೀವು ಕೂಡ ಅವರ ಕಣ್ಣಿಗೆ ಹಾಗೆಯೇ ಕಾಣ ಬಹುದು ಅದು ಸಹಜ..
ನೀವು ವೇದವು ವೇದವು ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದು ಕೆಲ ಮಂತ್ರಗಳ ಅಧಾರ ಕೊಟ್ಟಿರುತ್ತೀರಿ..
ನಾನು ವೇದವು ಹಿಂಸೆಯನ್ನೇ ಪ್ರತಿಪಾದಿಸುತ್ತದೆ ಎಂದು ಅದಕ್ಕೆ ಕೆಲವು ಮಂತ್ರಗಳನ್ನು ಅಧಾರ ಕೊಡುತ್ತೇನೆ..ಏನು ಹೇಳುತ್ತೆರೀರಿ...? ವೇದಗಳಲ್ಲಿಯೇ ಕೆಲ ಭಾಗಳಲಿ ಹೇಳಿದ ವಿಷಯದ ವಿರೋಧ ಮತ್ತೊಂದು ಭಾಗದಲ್ಲಿ ಕಂಡು ಬರುವುದನ್ನು ನೀವು ಗಮನಿಸಿದ್ದೀರಾ...? ಮತ್ತು ನೀವು ನೇರವಾಗಿ ವೇದವನ್ನು ತಿಳಿದವರಲ್ಲ.. ಯಾರೋ ಮಾಡುವ ಪ್ರವಚನಗಳನ್ನು ಕೇಳಿ ಮತ್ತು ಪುಸ್ತಗಳನ್ನು ಓದಿ ಅದರಿಂದ ಪ್ರಭಾವಿತರಾಗಿ ಒಂದು ಅಭಿಪ್ರಾಯಕ್ಕೆ ಬಂದಿದ್ದೀರಿ. ಆ ನಿಮ್ಮ ಅಭಿಪ್ರಾಯಕ್ಕೆ ಧಕ್ಕೆ ಮಾಡುವವರೆಲ್ಲ ಅವಿವೆಕಿಗಳಾಗಿ ಕಾಣುತ್ತಿದ್ದಾರೆ. ವೇದದ ತುಂಡು ತುಂಡು ಭಾಗಗಳನ್ನು ಉಪಯೋಗಿಸಿಕೊಂಡು ಏನು ಬೇಕಾದರೂ ವಾದಿಸಬಹುದು. "ಕತ್ತೆ"ಯನ್ನು "ಕುದುರೆ"ಯೆಂದು ಸಾಬೀತು ಮಾಡಬಹುದು.. ನೀವು ನೀಡುವ ಆಧಾರಗಳು ಹಾಗೆಯೇ ಇವೆ. ಅದೇ ವೇದ ಅದೇ ಅಧ್ಯಾಯ ಮತ್ತೊಂದು ಮಂತ್ರವನ್ನು ತೆಗೆದು ಅದರ ಅರ್ಥ ಹೀಗೇ ಎಂದು ಅದೇ ಆಧಾರವನ್ನು ತಲೆಕೆಳಗೆ ಮಾಡಿ ಹಾಕಬಹುದು.. ಇದೆಲ್ಲ ತರ್ಕ ತಿಳಿದವರು ಮಾಡುವ ಕೆಲಸಗಳು. ತರ್ಕ ಚೆನ್ನಾಗಿ ತಿಳಿದವರು ತಮಗೆ ಅನುಕೂಲವಾಗುವ ಮತ್ತು ತಮ್ಮ ವಾದಕ್ಕೆ ಹೊಂದುವ ಮಂತ್ರಭಾಗಗಳನ್ನು ಎತ್ತಿ ಉದಾಹರಿಸುತ್ತಾರೆ. ಕೆಲ ಸಾರಿ ಅವುಗಳ ಅರ್ಥವನ್ನು ತಮ್ಮ ವಾದಕ್ಕೆ ತಕ್ಕಂತೆ ತಿರುಚಿಕೊಳ್ಳುತ್ತಾರೆ. ನೀವು ಉದಾಹರಿಸಿರುವ ಬ್ರಾಹ್ಮಣಾಸ: ಸೋಮಿನೋ ವಾಚಮಕ್ರತ ಈ ಮಂತ್ರದಲ್ಲಿ ಅಧ್ವರ್ಯವೋ ಘರ್ಮಿಣ: ಎಂಬ ವಾಕ್ಯದಲ್ಲಿ "ಅಧ್ವರ್ಯವಃ" ಎಂಬ ಶಬ್ದಕ್ಕೆ ನೀವು ನೀಡಿರುವ ಅರ್ಥ ಅಧ್ವರ್ಯವ: = ಅಹಿಂಸಕರೂ ಎಂದು.. ಆದರೆ ದಯಮಾಡಿ ಸಾಯಣಾಚಾರ್ಯರು ಬರೆದ ಋಗ್ವೇದ ಭಾಷ್ಯ ಮತ್ತು "ನಿರುಕ್ತ" ಗ್ರಂಥದ ಆಧಾರದ ಮೇಲೆ ಮತ್ತು "ಮೀಮಾಂಸಾ ಶಾಸ್ತ್ರ" ದ ಅನುಸಾರ ಈ ಶಬ್ದದ ಅರ್ಥ ನೋಡಿ. (ಇದು ವೇದದ ಅರ್ಥ ತಿಳಿಯುವ ಸರಿಯಾದ ಕ್ರಮ ) ಅಧ್ವರ್ಯವಃ ಅಂದರೆ ಅಹಿಂಸಕರು ಎಂಬ ಅರ್ಥ ಇಲ್ಲ.
ಇದೆ ರೀತಿ "ಯಜಮಾಸ್ಯ ಪಶೂನ್ ಪಾಹಿ" ಎಂಬ ವಾಕ್ಯದ ಅರ್ಥ ಕೂಡ ತುಂಬಾ ಬಾಲೀಶವಾಗಿ ನೀಡಿದ್ದೀರಿ. "ಯಜಮಾನನ ಪಶುಗಳನ್ನು ರಕ್ಷಿಸು" ಎಂದು ಇಂದ್ರನಲ್ಲಿ ಬ್ರಮ್ಹಣರು ಪ್ರಾರ್ಥಿಸುವ ಮಂತ್ರ ಅದು. ಅದರ ಅರ್ಥ ಪಶುಗಳನ್ನು ಕೊಲ್ಲಬಾರದು ಎಂದು ಅಲ್ಲ. ಯಜಮಾನನ ಮನೆಯಲ್ಲಿ ಕುದುರೆ, ಕೋಳಿ..ಹಸು ಎಮ್ಮೆ ಎತ್ತು ಮುಂತಾದ ಪಶುಸಂಪತ್ತು ಇರುತ್ತದೆ.. ಅವುಗಳನ್ನು ವಿವಿಧ ರೋಗಬಾಧೆಗಳಿಂದ ರಕ್ಷಿಸು ಎಂಬ ಆಶಯ ಅದರ ಹಿಂದೆ ಇದೆ.
ಯಜ್ಞದಲ್ಲಿ ಪಶುಬಲಿ ಯಾವುದೇ ತಪ್ಪು ಕಲ್ಪನೆಯಿಂದ ಚಾಲ್ತಿಗೆ ಬಂದದ್ದಲ್ಲ. ನಾನು ಇದಕ್ಕೆ ಅಧಾರ ಕೊಡಲು ಹೋಗುವುದಿಲ್ಲ. ಏಕೆಂದರೆ.. ಅದಕ್ಕೆ ವಿರುದ್ಧವಾದ ಮತ್ತೊಂದು ಅಧಾರ ಸಿದ್ಧವಾಗಿರುತ್ತದೆ. ಸಂಸ್ಕೃತ ಭಾಷೆ ಅಷ್ಟೊಂದು ವಿಶಾಲವಾದ ಭಾಷಾ ಸಂಪತ್ತನ್ನು ಸಾಹಿತ್ಯವನ್ನೂ ಹೊಂದಿದೆ. ಇಂತಹ ವಿಷಯಗಳನ್ನೆಲ್ಲ... ಸಾಮಾನ್ಯ ಗ್ರಹಿಕೆಯಿಂದ ನಾವೀನಾವೇ ಆಲೋಚಿಸಬೇಕು.. "ಅವರು ಹೀಗೇ ಹೇಳಿದರು" ... "ಇವರು ಹೀಗೇ ಹೇಳಿದರು" ಎಂದು ಬೇರೆಯವರ ಅಭಿಪ್ರಾಯಗಳ, ಪ್ರವಚನಗಳ ಆಧಾರದ ಮೇಲೆ ನಮ್ಮ ಚಿಂತನೆ ನಿಲ್ಲ ಬಾರದು. ವೇದ ಕಾಲದಲ್ಲಿ ಪ್ರಾಣಿವಧೆ ಒಂದು ಸಾಮಾನ್ಯ ಸಂಗತಿಯಾಗಿತ್ತು.. ಇಂದಿನ ನಮ್ಮ ಬದಲಾದ ಕಾಲಮಾನಕ್ಕೆ ಮತ್ತು ಜೀವನವಿಧಾನಕ್ಕೆ ಅದೊಂದು ಹೇಯ ಕೃತ್ಯವಾಗಿ ಕಾಣಬಹುದು, ನಾವು ಕಾಲಚಕ್ರದಲ್ಲಿ ಹಿಂದಕ್ಕೆ ಪ್ರಯಾಣ ಮಾಡಿ ಅಂದಿನ ವೇದ ಕಾಲೀನ ಜೀವನ ವಿಧಾನ ...ಸ್ಥಿತಿಗತಿಗಳ ಪರಿಕಲ್ಪನೆ ನಮ್ಮ ಮನಸಿಗೆ ಬಂದರೆ ..ಎಲ್ಲ ವಿವರ ನಮ್ಮ ಮನಸಿನಲ್ಲಿ ಸಿಗುತ್ತದೆ.
ಕೆಲವೊಂದು ಉದಾಹರಣೆ ಕೇಳಿ
೧, ಅಂದಿನ ಕಾಲದಲ್ಲಿ ಸ್ತ್ರೀಯರಿಗೆ ಉಪನಯನ ಮಾಡುತ್ತಿದ್ದರು
೨, ಶ್ರಾದ್ಧದಲ್ಲಿ ಮಾಂಸಾಹಾರದ ಅಡಿಗೆ ಮಾಡಿಸುತ್ತಿದ್ದರು. ( ಶ್ರೀರಾಮ ದಶರಥನ ಶ್ರಾದ್ಧಕ್ಕೆ ಒಳ್ಳೆ ಜಾತಿಯ ಹಸುಗಳನ್ನು ಕೊಲ್ಲಿಸಿ ಬ್ರಾಮ್ಹನರಿಗೆ ಊಟ ಬಡಿಸಿದ್ದ. ಇದು ವಾಲ್ಮೀಕಿ ಬರೆದದ್ದು - ಯಾರೋ ಅನಾಮಧೇಯ ಹೇಳಿದ್ದಲ್ಲ.)
೩, ವಾತಾಪಿ ಎಂಬುವನು ತನ್ನ ಸಹೋದರ ಇಲ್ವಲನ ಜೊತೆ ಸೇರಿ ಬ್ರಾಮ್ಹನರ ವಧೆ ಮಾಡುತ್ತಿದ್ದ. ಇಲ್ವನ ಅತಿಥಿಯನ್ನು ಒಳಗೆ ಕರೆಯುತ್ತಿದ್ದ. ವಾತಾಪಿ ಮೇಕೆಯ ವೇಷವನ್ನು ಧಾರಣೆ ಮಾಡುತ್ತಿದ್ದ. ಆ ಮೇಕೆಯನ್ನು ಕಡಿದು ಭೋಜನ ಸಿದ್ಧ ಮಾಡಿ ಅತಿಥಿಗೆ ಬಡಿಸಿ ಅವನು ಊಟ ಮಾಡಿದ ಮೇಲೆ ಇಲ್ವಲನು "ವಾತಾಪಿ ಹೊರಗೆ ಬಾ" ಎಂದು ಕರೆಯುತ್ತಿದ್ದ. ಆಗ ವಾತಾಪಿ ಅತಿಥಿಯಾ ಹೊಟ್ಟೆ ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ವಿಷಯ ತಿಳಿದ ಅಗಸ್ತ್ಯ ಮುನಿಯು ಅವರ ಮನೆಗೆ ಊಟಕ್ಕೆ ಹೋದರೆ ಎಂದಿನಂತೆಯೇ ನಡೆಯಿತು .. ಆದರೆ ಊಟ ಮೊಗುದ ಕೂಡಲೇ.. ಅಗಸ್ತ್ಯರು " ವಾತಾಪಿ ಜೀರ್ನೋ ಭವ" ಎಂದು ಹೇಳಿದ ಕೂಡಲೇ... ವಾತಾಪಿ ಹೊಟ್ಟೆಯಲ್ಲಿ ಜೀರ್ಣವಾಗಿ ಹೋದ... ಅಲ್ಲಿ ಅಗ್ಗಸ್ತ್ಯರು ಊಟ ಮಾಡಿದ್ದು ಮೇಕೆ ಮಾಂಸವನ್ನು.. ಈ ಕಥೆ ಚಂದಮಾಮ ಪುಸ್ತಕದಲ್ಲಿ ಕೂಡ ಬಂದಿದೆ. ಎಲ್ಲರಿಗೂ ಗೊತ್ತಿದೆ. ಈಗಲೂ ಪ್ರತಿದಿನ ಊಟ ಆದ ಕೂಡಲೇ "ವಾತಾಪಿ ಜೀರ್ನೋ ಭವ" ಎಂದು ಹೇಳುವ ರೂಢಿ ಚಾಲ್ತಿಯಲ್ಲಿದೆ.
ಇಷ್ಟು ಸಾಕು....ಅಂದುಕೊಳ್ಳುತ್ತೇನೆ...
ಮಾಂಸಾಹಾರ... ಪಶುಬಲಿ...ಮುಂತಾದವುಗಳು.....ಅಗಸ್ತ್ಯ..... ರಾಮ... ವಿಶ್ವಾಮಿತ್ರ ಮುಂತಾದರ ಜೀವನದಲ್ಲಿ ...ನಮ್ಮ ವೈದಿಕ ಇತಿಹಾಸದಲ್ಲಿ ... ಎಷ್ಟು ಸಾಮಾನ್ಯ ಎಂಬುದನ್ನು ತಿಳಿಸಲಿಕ್ಕೆ. ಇಂದಿನ ಕಾಲದಲ್ಲಿ ಪ್ರಾಣಿಬಲಿ ಬೇಡ ಎಂದು ಹೇಳಿ... ಅದು ನ್ಯಾಯವಾಗಿರುತ್ತದೆ. ಆದರೆ ವೇದದಲ್ಲಿ ಅಹಿಂಸೆ ಹೇಳಿದೆ ಎಂದು ಯಾರದೂ ಮಾತು ಕೇಳಿಕೊಂಡು ...ಯಾವುದೂ ಮಂತ್ರದ ತುಂಡನ್ನು ಉದಾಹರಣೆ ಕೊಡಬೇಡಿ...
ಈ ಅಲ್ಪನ ಬಗ್ಗೆ ಕ್ಷಮೆ ಇರಲಿ...
ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ.
ನಮಸ್ಕಾರ
No comments:
Post a Comment