Tuesday, March 13, 2012

ವಸಂತ್Mar 13, 2012 08:31 AM

ಮಾನ್ಯ ದತ್ತಾತ್ರೇಯರವರೆ,

ನಾನು ವೇದಾಧ್ಯಯನ ಮಾಡಿದವನೂ ಅಲ್ಲ. ತಮ್ಮಷ್ಟು ಸಂಸ್ಕೃತ ಪಾಂಡಿತ್ಯವೂ ನನಗಿಲ್ಲ..ತೀರಾ ಸಾಮಾನ್ಯ ವ್ಯಕ್ತಿಯಾಗಿ ನನ್ನಚಿಂತನೆ ಯನ್ನು ತಮ್ಮ ಮುಂದಿಡುತ್ತೇನೆ.

೧. ವೇದಗಳು ಪುರಾಣಗಳಿಗಿಂತಲೂ ಪ್ರಾಚೀನವಾದುದು. ಆದುದರಿಂದ ವೇದಗಳ ಉಲ್ಲೇಖ ಪುರಾಣಗಳಲ್ಲಿದೆ. ಆದರೆ ಪುರಾಣಗಳ ಉಲ್ಲೇಖ ವೇದಗಳಲ್ಲಿ ಇರಲು ಸಾಧ್ಯವಿಲ್ಲ. ಪುರಾಣಗಳಲ್ಲಿ ವೇದಗಳನ್ನು ತಿರುಚಿರುವ ಸಾಧ್ಯತೆಗಳಿವೆ. ಆದುದರಿಂದ ವೇದಗಳಿಗೆ ಪುರಾಣಗಳ ಸಮರ್ಥನೆ ಸರಿಯೆನಿಸುವುದಿಲ್ಲ...

೨. ಯಜ್ಝ ಅಂದರೆ ’ಅಧ್ವರ’ ಅಹಿಂಸೆ ಎಂಬ ಅರ್ಥವಿದೆಯೆಂದು ನಮ್ಮಂತಹವರಿಗೆ ತಿಳಿದವರು ಹೇಳಿದ, ಓದಿದ ನೆನಪು. ಪ್ರಾಣಿಬಲಿ ಎಂದರೆ ಹಿಂಸೆ, ಹಿಂಸೆಯೆಂಬುದನ್ನು ಮಾನವ ಧರ್ಮ ಎಂದು ತಾವು ಒಪ್ಪುವುದಾದರೆ ಅದು ನಮ್ಮೆಲ್ಲರ ದೌರ್ಭಾಗ್ಯ.

೩. ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದುದರಿಂದ ತಮ್ಮ ಬರಹ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೆ. ಇದನ್ನು ತಾವು ಅರಿತುಕೊಳ್ಳಬೇಕು. ವೇದ, ಶಾಸ್ತ್ರಗಳ ವಿಷಯದಲ್ಲಿ ಅಲ್ಪಮತಿಯಾಗಿರುವ ನಮ್ಮಂತಹವರಿಗೆ ಈ ನಂಬಿಕೆಗಳನ್ನು ಆಚರಿಸಲು ಪ್ರೋತ್ಸಾಹಿಸಬೇಡಿ ಎಂದು ಕಳಕಳಿಯ ಪ್ರಾರ್ಥನೆ...

  • ವಸಂತ್ ರವರೆ..ನಾನು ಪ್ರಾಣಿಬಲಿ .. ನಡೆಯಲಿ ..ಮಾಡಿ ಎಂದು ನನ್ನ ಪ್ರತಿಕ್ರಿಯೆಯಲ್ಲಿ ಎಲ್ಲೂ ನಾನು ಹೇಳಿಲ್ಲ. ಪ್ರಾಣಿಬಲಿಯನ್ನು ನಾನು ವಿರೋಧಿಸುತ್ತೇನೆ. ಆದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವ ವಿಧಾನ ತಪ್ಪು ಕಲ್ಪನೆಯಿಂದ ಪ್ರಾರಂಭವಾದದ್ದು.. ಮತ್ತು ವೇದಗಳಲ್ಲಿ ಹಾಗೆ ಹೇಳಿಯೇ ಇಲ್ಲ ಎಂದು ವಾದಿಸಿದ ಶ್ರೀಧರ್ ರವರಿಗೆ ಉತ್ತರ ಕೊಟ್ಟಿದ್ದೇನೆ. ಅವರ ವಾದ ತಪ್ಪು ಎಂದು. ಹಿಂಸೆಯನ್ನು ಮಾನವ ಧರ್ಮ ಎಂದು ನಾನು ಹೇಳುವುದಿಲ್ಲ .. ಹೇಳಿಯೂ ಇಲ್ಲ.
    "ಪ್ರಾಣಿಬಲಿ ಎಂಬುದು ಮೂಢನಂಬಿಕೆ. ಅದನ್ನು ತಡೆಗಟ್ಟಲು ಸರಕಾರವೇ ಕಾನೂನು ರೂಪಿಸಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯ". ಎಂಬ ಈ ನಿಮ್ಮ ಮಾತಿಗೆ ಉತ್ತರ ಏನೆಂದರೆ.. ಸರ್ಕಾರಕ್ಕೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂಧ...? ಸಾವಿರಾರು ವರ್ಷಗಳ ಕೆಳಗೆ ದೇಶದ ಚಕ್ರವರ್ತಿ ರಾಜರುಗಳು ಮಹರ್ಷಿಗಳ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದ ಯಜ್ಞಗಳಲ್ಲಿ ಪಶುವಧೆ ನಡೆಯುತ್ತಿತ್ತು. ಬಲಿ ಅಲ್ಲ. ( ವಧಿಸಿದ ಪಶುವಿನ ಹೊಟ್ಟೆಯಲ್ಲಿನ "ವಪೆ' ಎಂಬ ಭಾಗವನ್ನು ಮಾತ್ರ... ಯಜ್ಞದಲ್ಲಿ ಆಹುತಿ ಕೊಡಲಾಗುತ್ತದೆ.. ಅದರ ಶವವನ್ನು ಭೂಮಿಯಲ್ಲಿ ಹೂಳಲಾಗುತ್ತದೆ. ಇತ್ತೇಚೆಗೆ ನಡೆಯುವ ಪ್ರಾಣಿಬಲಿ-ನಂತರದ ಭಕ್ಷಣೆ ಅಲ್ಲಿ ನಡೆಯುವುದಿಲ್ಲ.
    ಹಾಗಾದರೆ ಯಜ್ಞ ನಡೆಸಿದ ಚಕ್ರವರ್ತಿಗಳು-- ಮಹರ್ಷಿಗಳು ಮಂತ್ರದ್ರಷ್ಟಾರರು ಅವರು ಕಂಡುಕೊಂಡ ಮಂತ್ರಗಳು (ವೇದಗಳು) ಎಲ್ಲರೂ ಮೂಢನಂಬಿಕೆ ಹೊದಿದ್ದರು ಹಾಗೂ ಇಂದಿನ ಘನಸರ್ಕಾರ ಮಾತ್ರ ವಿವೆಕವಂತ ಎನ್ನುವುದು ನಿಮ್ಮ ಅಭಿಪ್ರಾಯವೇ...? ಕಾನೂನಿಗೂ ವೇದಕ್ಕೂ ಎಲ್ಲಿಂದೆಲ್ಲಿಯ ಸಂಬಂದ ...ವಸಂತ್...?

    ನಾವೆಲ್ಲಾ ಮರೆಯುತ್ತಿರುವ ವಿಷಯ ಏನೆಂದರೆ ಯಜ್ಞದಲ್ಲಿ ಪಶುವನ್ನು ಕೊಲ್ಲುವುದು ಅದನ್ನು ಮನುಷ್ಯರು ತಿನ್ನುವುದಕ್ಕಾಗಿ ಅಲ್ಲ. ( ಮಾರಮ್ಮನ ಜಾತ್ರೆ..ಮುಂತಾದ ಅನೇಕ ಗ್ರಾಮೀಣ ಆಚರಣೆಗಳಲ್ಲಿ ಮನುಷ್ಯರು ತಾವು ತಿನ್ನಲಿಕ್ಕಾಗಿ ಪಶುಗಳನ್ನು ಕೊಲ್ಲುತ್ತಾರೆ ಮತ್ತು ತಿನ್ನುವ ಮೊದಲು ದೇವರಿಗೆ ಸಮರ್ಪಿಸಿದ್ದೆವೆಂದು ಭಾವಿಸಿತ್ತಾರೆ- ಈ ರೀತಿಯ ಪಶುಬಲಿ ನಿಷೇಧಕ್ಕೆ ಒಳಗಾಗಿದೆ.) ಆದರೆ ಯಜ್ಞದಲ್ಲಿ ಕಡಿದ ಪಶುವನ್ನು ಯಾರೂ ತಿನ್ನುವುದಿಲ್ಲ. ಗಮನಿಸಿ. ತಿನ್ನುವ ಆಸೆಯಿಂದ ಹುಟ್ಟಿಕೊಂಡ ಗ್ರಾಮೀಣ ಮೂಢ ನಂಬಿಕೆಯ ಆಚರಣೆ ಇದಲ್ಲ. ಇದು ವೇದ ಪ್ರತಿಪಾದಿತ ಯಜ್ಞದ ಪ್ರಮುಖ ಘಟ್ಟ. ಅಂತಹ ಯಜ್ಞದ ವಿಧಾನವೇ ತಪ್ಪು ಎಂದು ನೀವು ಹೇಳುವುದಾದರೆ ವೇದವೇ ತಪ್ಪು ಎಂದಾಯಿತು.

    ಸರ್ಕಾರ ನಡೆಯುದು ಹೇಗೆ...? ಸಂವಿಧಾನದ ಪ್ರಕಾರ. ಅಲ್ಲವೇ...? ಸಂವಿಧಾನ ಬರೆದದ್ದು ಯಾರು...? ಅಂಬೇಡ್ಕರ್...
    ಅಂಬೇಡ್ಕರ್ ಏನಾಗಿದ್ದರು ಗೊತ್ತೇ...? ಬೌದ್ಧ ಧರ್ಮೀಯರು.... ಅವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಪರಿವರ್ತನೆಗೊಂಡವರು... ಯಾಕೆ ಪರಿವರ್ತನೆಗೊಂಡರು...? ಮತ್ತು ಬೌದ್ಧ ಧರ್ಮ ಹೇಗೆ ಪ್ರಾರಂಭವಾಯಿತು...? ಅದರ ಮೂಲ...ತತ್ವ ಏನು ಎಂಬುದು ಎಲ್ಲರಿಗೂ ಗೊತ್ತು...
    ವೇದ ಧರ್ಮವನ್ನು ವಿರೋಧಿಸಿಯೇ ಬೌಧ್ಧ ಧರ್ಮ ಬೆಳೆದದ್ದು. ಮತ್ತು ವಿರೋಧಿಸಲಿಕ್ಕಾಗಿಯೇ ಹುಟ್ಟಿಕೊಂಡದ್ದು.. ಶೂನ್ಯವಾದ ಅದರ ಮೂಲ ತತ್ವ... ವೈದಿಕ ಆಚರಣೆಯಲ್ಲಿ... ಯಜ್ಞ ಇದೆ.. ಯಜ್ಞದಲ್ಲಿ ಪಶುಬಲಿ ಇದೆ. ಅದು ತಪ್ಪು.... ಅಹಿಂಸೆಯೇ ಪರಮ ಧರ್ಮ...ಎನ್ನುವ ಚಿಂತನೆಯೊಂದಿಗೆ ಪ್ರಾರಂಭವಾದದ್ದು ಬೌದ್ಧ ಧರ್ಮ.
    ಈ ಬೌದ್ಧರ ಹಾವಳಿ ಅತಿಯಾದಾಗ... ೧೨ ಶತಮಾನದಲ್ಲಿ ಹುಟ್ಟಿದವರೇ ಶಂಕರಾಚಾರ್ಯರು. ಅವರು ಮಾಡಿದ್ದೇನು....? ಬೌದ್ಧ ಮತಪ್ರಚಾರಕರನ್ನು ವಾದಕ್ಕೆ ಎಳೆದು ವಾದದಲ್ಲಿ ಸೋಲಿಸಿ...ದೇಶದಿಂದ ಅಟ್ಟುತ್ತಿದ್ದರು... ಈ ಮೂಲಕ ಬೌದ್ಧ ಧರ್ಮದವರನ್ನು ಓಡಿಸಿ ಮತ್ತೆ ವೈದಿಕ ಆಚರಣೆಗಳನ್ನು... ಭಾಷ್ಯ ರಚನೆಯ ಮೂಲಕ ಸ್ತೋತ್ರ ರಚನೆಯ ಮೂಲಕ ಪ್ರಚಾರ ಪಡಿಸಿದವರು... ಅವರು ಈಶ್ವರನ ಅವತಾರ ಎಂದು ಹೇಳುತ್ತಾರೆ... (ನಾನು ನಂಬುವುದಿಲ್ಲ.) ಸರ್ಕಾರದ ಮಾತನ್ನು ಅದರ ಕಾನೂನನ್ನು ನೀವು ಶಿರೋಧಾರ್ಯ ಎಂದು ಭಾವಿಸುವುದಾದರೆ.. ನೀವು ಬೌದ್ಧ ಧರ್ಮವನ್ನು ಒಪ್ಪಿಕೊಳ್ಳಬೇಕು.. ಮತ್ತು ವೇದ.. ಋಷಿಗಳು... ಶಂಕರಾಚಾರ್ಯರು..ಎಲ್ಲ ಮೂರ್ಖರು ಎಂದು ಒಪ್ಪಿಕೊಳ್ಳಬೇಕು....ಸಾಧ್ಯವೇ...?

    ಬಿಡಿ..ಅಹಿಂಸೆಯೇ ಬೇರೆ... ಯಜ್ಞದ ಚರ್ಚೆಯೇ ಬೇರೆ... ಎರಡನ್ನು ಸೇರಿಸಿ ಗೊಂದಲ ಮಾಡಿಕೊಳ್ಳಬೇಡಿ....
    ಪ್ರತಿದಿನ ಕೋಟ್ಯಂತರ ಪ್ರಾಣಿ ಪಕ್ಷಿಗಳನ್ನು ಆಹಾರಕ್ಕಾಗಿ ಕೊಲೆ ಮಾಡುವ ವಿಷಯದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಒಂದು ಯಜ್ಞ ನಡೆದರೆ ಅದರ ವಿಧಾನವನ್ನೇ ಮೂಢ ನಂಬಿಕೆ....ಪರಂಪರೆಯನ್ನೇ ತಪ್ಪು ಎಂದು ನಾವು ವಾದಿಸಲು ಶುರು ಮಾಡುತ್ತೇವೆ.. ಅದು ದುರಂತ ಅಲ್ಲವೇ...?

    Delete
  • This comment has been removed by the author.

  • ಕ್ಷಮಿಸಿ...ಶಂಕರರು ಹುಟ್ಟಿದ್ದು ೮ನೆ ಶತಮಾನದಲ್ಲಿ ೧೨ ಅಲ್ಲ.
    ಪಶುವನ್ನು ಕೊಲ್ಲುವುದು ತಪ್ಪೋ ಸರಿಯೋ...ಎನ್ನುವುದು ಬೇರೆ ವಿಚಾರ.
    ಆದರೆ ..ಯಜ್ಞದಲ್ಲಿ ಪಶುಬಲಿ ಇಲ್ಲವೇ ಇಲ್ಲ ...ಅದು ತಪ್ಪು ಆಚರಣೆ... ವೇದದಲ್ಲಿ ಹೇಳಿಯೇ ಇಲ್ಲ. ಎಂದು ವಾದಿಸಬೇಡಿ...
    ಏಕೆಂದರೆ ...ಪಶುಬಲಿ ಯಜ್ಞದಲ್ಲಿ ಇಲ್ಲದೇ ಹೋಗಿದ್ದರೆ... ಬೌದ್ಧರಿಗೆ...ತಮ್ಮ ಧರ್ಮವನ್ನು ಭಾರತದಲ್ಲಿ ..ತರಲು ಸಾಧ್ಯವೇ ಆಗುತ್ತಿರಲಿಲ್ಲ. .. . ಸ್ವಲ್ಪ ಯೋಚಿಸಿ..(ಬೌದ್ಧ ಧರ್ಮ ಎಷ್ಟು ಸರಿ.... ವೈದಿಕ ಧರ್ಮ ಎಷ್ಟು ಸಾಚಾ ಅನ್ನುವು ಬೇರೆಯದೇ ಚರ್ಚೆ.).

  • No comments:

    Post a Comment